ಐಡಿಡಿಯ ಉದ್ದೇಶಗಳು

  • ವಿಶೇಷವಾಗಿ ರಾಜ್ಯ ಮಟ್ಟದಲ್ಲಿ ಸರ್ಕಾರಕ್ಕೆ ದೊರೆಯುವ ಆರ್ಥಿಕ ಸಂಪನ್ಮೂಲಗಳ ಮೇಲಿನ ನಿರ್ಬಂಧಗಳು ಮೂಲಸೌಲಭ್ಯ ಯೋಜನೆಗಳ ಅಭಿವೃದ್ಧಿಯಲ್ಲಿ ಖಾಸಗಿ ಕ್ಷೇತ್ರದ ಪಾಲ್ಗೊಳ್ಳುವಿಕೆಯನ್ನು ಆಕರ್ಷಿಸುವುದರ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸಿದೆ. ವಿಶೇಷವಾಗಿ ರಾಜ್ಯ ಮಟ್ಟದಲ್ಲಿ ಸರ್ಕಾರಕ್ಕೆ ದೊರೆಯುವ ಹಣಕಾಸಿನ ಸಂಪನ್ಮೂಲಗಳ ಮೇಲಿನ ನಿರ್ಬಂಧಗಳಿಂದಾಗಿ ಮೂಲಸೌಕರ್ಯ ಯೋಜನೆಗಳ ಅಭಿವೃದ್ಧಿಯಲ್ಲಿ ಖಾಸಗಿ ಕ್ಷೇತ್ರದ ಪಾಲ್ಗೊಳ್ಳುವಿಕೆಯನ್ನು ಆಕರ್ಷಿಸುವುದರ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸಿದೆ. ಅನಿಶ್ಚಿತತೆಯನ್ನು ಹಂಚಿಕೊಳ್ಳುವ ಪರಿಣಾಮಕಾರಿ ಮಾರ್ಗವನ್ನು ಕಂಡುಕೊಳ್ಳಲು, ಜಂಟಿ ಬಂಡವಾಳಹೂಡಿಕೆ ಮತ್ತು ಖಾಸಗಿ ನಿರ್ವಾಹಕರು ಮತ್ತು ಸಾರ್ವಜನಿಕ ಪ್ರಾಧಿಕಾರಗಳ ಮಧ್ಯೆ ಸಮತೋಲನವಾದ ಸಹಭಾಗಿತ್ವ,ಸಾರ್ವಜನಿಕ-ಖಾಸಗಿ ಸಹಭಾಗಿತ್ವಗಳನ್ನು ಹೊಂದಲು ಕರ್ನಾಟಕ ರಾಜ್ಯವು ಮೂಲಸೌಲಭ್ಯ ಅಭಿವೃಧ್ಧಿ ಇಲಾಖೆಯನ್ನು 1996 ರಲ್ಲಿ ಸ್ಥಾಪಿಸಿದೆ.
  • ರಾಜ್ಯಕ್ಕಾಗಿ ವೈಮಾನಿಕ , ರೈಲು ಮತ್ತು ಕಡಲ ಸಂಪರ್ಕವನ್ನು ಅಭಿವೃದ್ಧಿಪಡಿಸುವ ವಲಯಗಳಲ್ಲಿ ಮಹತ್ವದ ಪಾತ್ರ ವಹಿಸಲು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ (ಐಡಿಡಿ) ಅನ್ನು ಸ್ಥಾಪಿಸಲಾಗಿದೆ ಮತ್ತು ರಾಜ್ಯಕ್ಕಾಗಿ ಕಡಲ ಸಂಪರ್ಕ ಮತ್ತು ಸವಾಜನಿಕ ಖಾಸಗಿ ಸಹಭಾಗಿತ್ವದ (ಪಿಪಿಪಿ) ಮೂಲಕ ಸಾರ್ವಜನಿಕ ಮೂಲಸೌಲಭ್ಯದಲ್ಲಿ ಹೆಚ್ಚಿದ ಖಾಸಗಿ ಬಂಡವಾಳವನ್ನು ಉತ್ತೇಜಿಸುವುದು.
  • ಕರ್ನಾಟಕ ಸರ್ಕಾರವು ಮೂಲಸೌಲಭ್ಯ ಯೋಜನೆಗಳ ಪರಿಷ್ಕೃತಪಿಪಿಪಿ ನೀತಿ, 2018ನನ್ನು ಘೋಷಿಸಿದೆ. ಐಡಿಡಿಯಲ್ಲಿ "ಪಿಪಿಪಿ ಕೋಶ"ವನ್ನು ಕೂಡ ಸ್ಥಾಪಿಸಿದೆ. ಪಿಪಿಪಿ ಕೋಶವು ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪಿಪಿಪಿ ಕೋಶಕ್ಕೆ ತಾಂತ್ರಿಕ ಸಲಹೆ ಮತ್ತು ಬೆಂಬಲವನ್ನು ಐಡೆಕ್ ಸಂಸ್ಥೆಯು ಒದಗಿಸುತ್ತದೆ. ಅಗತ್ಯವಿದ್ದಾಗಪಿಪಿಪಿ ಕೋಶವು ಸಲಹೆಗಾರರನ್ನು ತೊಡಗಿಸಿಕೊಳ್ಳುತ್ತದೆ. ಪಿಪಿಪಿ ಕೋಶವು ಸಾವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಸ್ತಾಪಗಳನ್ನು ಸ್ವೀಕರಿಸುವ ನೋಡಲ್ ಸಂಸ್ಥೆಯಾಗಿದ್ದು, ಅವುಗಳನ್ನು ಪರಿಗಣನೆಗೆ ಮತ್ತು ಅನುಮೋದನೆಗೆ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯ ಮುಂದೆ ಮಂಡಿಸಲಾಗುತ್ತದೆ. ಪಿಪಿಪಿ ಕೋಶವು ಯೋಜನೆಗಳ ಅಭಿವೃದ್ಧಿಯ ವಿವಿಧ ಹಂತಗಳಲ್ಲಿ ರಾಜ್ಯದ ವಿವಿಧ ಇಲಾಖೆ / ಸಂಸ್ಥೆಗಳಿಗೆ ಸಹಾಯ ನೀಡುತ್ತದೆ.
  • ಕರ್ನಾಟಕ ರೈಲ್ವೇ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಾರ್ಪೊರೇಷನ್ (ಕೆ-ರೈಡ್) ಮೂಲಕ ರೈಲ್ವೆ ಸಚಿವಾಲಯದ ಪಾಲುದಾರಿಕೆಯೊಂದಿಗೆ ಹಾಸನ-ಮಂಗಳೂರು ರೈಲ್ವೆ ಮಾರ್ಗದಂತಹ ಆಯ್ದ ರೈಲ್ವೆ ಯೋಜನೆಗಳ ಅಭಿವೃದ್ಧಿಗಾಗಿ ಐಡಿಡಿ ಕಾರ್ಯನಿರ್ವಹಿಸುತ್ತದೆ.
  • ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಜೊತೆಗೆ ಕೆಎಸ್ಐಐಡಿಸಿ ಮೂಲಕ ಈಕ್ವಿಟಿ ಪಾಲ್ಗೊಳ್ಳುವಿಕೆ ಮತ್ತು ಮೂಲ ಸೌಕರ್ಯಗಳ ಬೆಂಬಲವನ್ನು ಹೊಂದಲು ಐಡಿಡಿಯು ಸಹಕರಿಸುತ್ತಿದೆ.
  • ಗೇಲ್ ಸಂಸ್ಥೆಯೊಂದಿಗೆ ಅನಿಲ ಪೈಪ್‌ ಲೈನ್‌ ಯೋಜನೆಯನ್ನು ಸ್ಥಾಪಿಸಲು ಐಡಿಡಿಯು ಸಹಕರಿಸುತ್ತಿದೆ.
  • ಐಡಿಡಿಯು ರಾಜ್ಯದಹತ್ತು ಜಿಲ್ಲೆಗಳಲ್ಲಿ ಏರ್‌ರ್ಸ್ಟ್ರಿಪ್‌ಗಳನ್ನು ಸ್ಥಾಪಿಸುತ್ತಿದೆ.
  • ಮಂಗಳೂರು, ಮೈಸೂರು, ಬೆಳಗಾವಿ ಮತ್ತು ಹುಬ್ಬಳ್ಳಿಗಳಲ್ಲಿ ಏರ್‌ಪೋಟ್‌ ಅಥಾರಿಟಿ ಆಫ್‌ ಇಂಡಿಯಾದ ವಿಮಾನ ನಿಲ್ದಾಣಗಳ ವಿಸ್ತರಣೆ ಯೋಜನೆಗಳಿಗಾಗಿ ಐಡಿಡಿಯು ಸಹಕರಿಸುತ್ತಿದೆ
  • ಬೀದರ್, ಕಲಬುರ್ಗಿ, ಬಿಜಾಪುರ, ಬಳ್ಳಾರಿ, ಶಿವಮೊಗ್ಗ ಮತ್ತು ಹಾಸನಗಳಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿಯನ್ನು ಐಡಿಡಿಯಿಂದ ಪಿಪಿಪಿ ಅಡಿಯಲ್ಲಿ ಕೈಗೊಳ್ಳಲಾಗಿದೆ.